ಗುರುವಾಣಿ 3: ವಾಯುಪುತ್ರನ ವ್ಯಕ್ತಿತ್ವ

 || ಓಂ ಆಂಜನೇಯಾಯ ನಮಃ||
ಗುರುವಾಣಿ 3:   ವಾಯುಪುತ್ರನ ವ್ಯಕ್ತಿತ್ವ 

ಸರ್ವವಂದಿತ ಲೋಕಪೂಜಿತ ವಾಯುಪುತ್ರನ ವ್ಯಕ್ತಿತ್ವವನ್ನ ಅರ್ಥ ಮಾಡಿಕೊಳ್ಳುವ ಚಿಕ್ಕ ಪ್ರಯತ್ನವೇ ಇಂದಿನ ಗುರುವಾಣಿ. ಶ್ರೀ ರಾಮನ ಅತ್ಯಂತ ನಿಷ್ಠಾವಂತ/ ಪರಮ ಸೇವಕ, ರಾಮಕಥ ಲೋಲ ಆಂಜನೇಯ ಶ್ರೀ ರಾಮನಿಗೆ ತೋರಿದ ಭಕ್ತಿ ಮತ್ತು ಪ್ರೀತಿಯಿಂದಲೇ ಇತರ ದೇವತೆಗಳ ಪ್ರೀತಿಯನ್ನು ಗಳಿಸಿ ಸರ್ವಜನ ಸರ್ವಪೂಜಿತನಾದ .ಇದು ಈ ವಾಯುಪುತ್ರನ  ಸಾಮರಸ್ಯದ ಗುಣವನ್ನು ತೋರಿಸುತ್ತದೆ. 

 ಒಮ್ಮೆ ಸೀತಾದೇವಿ ಹನುಮಂತನಿಗೆ ಮುತ್ತಿನ ಹಾರವನ್ನು ಉಡುಗೊರೆಯಾಗಿ ನೀಡುತ್ತಾಳೆ. ಹನುಮಂತ ಏನು ಮಾಡುತ್ತಾನೆ ಗೊತ್ತ? ಪ್ರತಿಯೊ ಮುತ್ತನ್ನೂ ಕೂಲಂಕಷವಾಗಿ/ಸೂಕ್ಷ್ಮವಾಗಿ ಪರಿಶೀಲಿಸಿ, ಆ ಮುತ್ತಿನ ಹಾರವನ್ನು ಪಕ್ಕಕ್ಕೆ ಎಸೆಯುತ್ತಾನೆ. ಆಶ್ಚರ್ಯಚಕಿತಳಾದ ಸೀತಾ ಮಾತೆ ಇದಕ್ಕೆ ಕಾರಣವನ್ನು ಕೇಳಿದಾಗ ಆಂಜನೇಯ ಹೀಗೆ ಉತ್ತರಿಸುತ್ತಾನೆ.” ಮುತ್ತುಗಳು  ಅಮೂಲ್ಯವೇ ಸರಿ.  ಆದರೆ ಮುತ್ತಿಗಿಂತ ಅಮೂಲ್ಯವಾದ ನನ್ನ ಗುರುವರ್ಯ ಆದರ್ಶಪುರುಷ ಶ್ರೀ ರಾಮನನ್ನಾಗಲಿ ಅಥವಾ ಆತನ ಹೆಸರನ್ನಾಗಲೀ ಅದರಲ್ಲಿ ಕಾಣಲಾಗಲಿಲ್ಲ. ಎಲ್ಲಿ ಅಥವಾ ಯಾವುದರಲ್ಲ್ಲಿ ಶ್ರೀ ರಾಮನಿಲ್ಲವೋ ಆ ವಸ್ತು, ಆ ಸಮಯ, ಆ ಪ್ರದೇಶ ನಿಷ್ಪ್ರಯೋಜಕ” ಎಂದು ಹೇಳುತ್ತಾನೆ. ಈ ಪವನಪುತ್ರನ ಗುರುಕಾಯಕ ನಿಷ್ಠೆಯಿಂದ ನಾವೇನು ಕಲಿಯಬಹುದೆಂದರೆ, ನಮ್ಮ ಕಾಯಕ ಅಥವಾ ವೃತ್ತಿ ಯಾವುದೇ ಆಗಿರಲಿ ಸಂಪೂರ್ಣ ನಿಸ್ವಾರ್ಥತೆಯಿಂದ, ಅಲ್ಪ ಲಾಭ ಅಥವಾ ಆಕರ್ಷಣೆಗೆ ಒಳಗಾಗದೆ ನಮ್ಮ ಕಾರ್ಯಕ್ಕೆ ಬದ್ಧರಾಗಿ ಮುನ್ನಡೆದರೆ ಅದೇ ಕೈಲಾಸ ಹಾಗೂ ಸಾರ್ಥಕ ಜೀವನ. ಇದೇ ನಾವು ವಾಯುಪುತ್ರನಿಂದ ಕಲಿಯಬೇಕಾದ ಆದರ್ಶ ಜೀವನದ ಸರಳ ಸೂತ್ರ. ವಾಯುಪುತ್ರನಿಂದ. ಇನ್ನೊಂದು ದುಷ್ಟಾಂತ. ಸೀತೆಯ ಅಪಹರಣದ ನಂತರ ಈ ವಾನರವೀರ ವಾನರ ಕೂಟದ ಇತರ ಸದಸ್ಯರೊಂದಿಗೆ ಸೀತಾ ಮಾತೆಯ ಹುಡುಕಾಟಕ್ಕೆ ಅಣಿಯಾಗುತ್ತಾನೆ. ಹಗಲು ರಾತ್ರಿ ಕಾಡು ಮೇಡು, ಗಿರಿ ಕಣಿವೆ, ಪರ್ವತ, ಮರುಭೂಮಿಯನ್ನ್ನು ಸುತ್ತಾಡಿ ದಕ್ಷಿಣದ ತುದಿಯ ಸಮುದ್ರ ತೀರಕ್ಕೆ ತಲುಪುತ್ತಾನೆ. ಆದರೆ ಸೀತಾ ಮಾತೆ ಮಾತ್ರ ಕಾಣಿಸುವುದಿಲ್ಲ. ಇನ್ನೇನು ಈ ವ್ಯರ್ಥ/ ಹುಡುಕಾಟವನ್ನು ಅಂತ್ಯ ಮಾಡಬೇಕು ಅಂದುಕೊಳ್ಳುವಾಗ ಸೀತೆಯ ಅಪಹರಣ  ಲಂಕಾಧಿಪತಿ ರಾವಣನಿಂದ ನಡೆದಿದೆ ಎಂಬ ವಿಷಯ ಎಲ್ಲಾ ಕಡೆಯಿಂದ ಬರಲಾರಂಭಿಸಿತ್ತದೆ. ಸುದ್ದಿ ವಾನರ ವೀರರಿಗೆ ಸಿಹಿಯಾಗಿದ್ದರೂ ಸಹ/ಸಂತೋಷ ಕೊಟ್ಟರೂ ಸಹ ಸಮುದ್ರವನ್ನು ದಾಟಿ ಲಂಕೆಗೆ ಹೋಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಇದು ಆ ಸಿಹಿ ಸುದ್ದಿಯನ್ನು ಕ್ಷಣಾರ್ಧದಲ್ಲಿ ಕಹಿ ಆಗುವಂತೆ ಮಾಡುತ್ತದೆ.  ಆದರೆ ಕಪಿಶ್ರೇಷ್ಠ, ವಾನರವೀರ, ವೀರಾಂಜನೇಯ ಎದೆಗುಂದಲಿಲ್ಲ. ತನ್ನಲ್ಲಿರುವ ಶಕ್ತಿಯಲ್ಲಿ ಅದಕ್ಕೆಅಗತ್ಯವಾದುದನ್ನು 

 ಉಪಯೋಗಿಸಿ ಸ್ವರೂಪವನ್ನ್ನು ಬದಲಿಸಿಕೊಂಡು, ತನ್ನ ಸಾಮರ್ಥ್ಯವನ್ನು/ಶಕ್ತಿಯನ್ನು ಹೆಚ್ಚಿಸಿಕೊಂಡು ಲಂಕೆಗೆ ಜಿಗಿದ. ಇದಾದ ನಂತರ ಏನಾಯಿತೆಂಬುದು ನಿಮಗೆಲ್ಲ ತಿಳಿದ ವಿಷಯ.

 ಆಂಜನೇಯನ ದೃಢ ನಿರ್ಧಾರದಿಂದ ನಾವೇನು ಕಲಿಯಬಹುದೆಂದರೆ ನಮ್ಮೆಲ್ಲರಲ್ಲೂ ಒಂದು ವಿಶೇಷವಾದ ಸಾಮರ್ಥ್ಯವಿರುತ್ತದೆ ಆದರೆ ನಾವು ನಮ್ಮ ಸಾಮರ್ಥ್ಯವನ್ನು ತಿಳಿಯದೆ ಇದ್ದಿದ್ದರಲ್ಲೇ ತೃಪ್ತಿ ಕಾಣಬಯಸುತ್ತೇವೆ. ಆದರೆ ಆಂಜನೇಯನಾದರೋ ತನ್ನ ಸಾಮರ್ಥ್ಯವನ್ನು ಅರಿತು ಲಂಕೆಗ ಜಿಗಿದ. 

ಸಾಧನೆಗೆ ಅಸಾಧ್ಯವಾದುದು  ಯಾವುದೂ ಇಲ್ಲ. ಆದರೆ ನಾವು ನಮ್ಮಲ್ಲಿರುವ ಸಾಮರ್ಥ್ಯವನ್ನ ಅರಿತು ಅದರಂತೆ ಕಾರ್ಯ ವಹಿಸಿದರೆ ಜಯ ದೊರೆಯುವುದು ಖಂಡಿತ/ಖಚಿತ.

 ವೀರಂಜಾನೇಯನನ್ನು ಆದರ್ಶವಾಗಿಟ್ಟುಕೊಂಡು ಅವನ ನಾಮಸ್ಮರಣೆಯೊಂದಿಗೆ ನಾವೆಲ್ಲರೂ ಈ ಜೀವನ ಪಥದಲ್ಲಿ ಮುಂದೆ ಮುಂದೆ ಸಾಗೋಣ.

|| ಓಂ ಆಂಜನೇಯಾಯ ನಮಃ||

Voice of RK