ಗುರುವಾಣಿ 10: ಹನುಮಂತನ ಸಂವಹನ ಕೌಶಲ್ಯ

ಗುರುವಾಣಿ 10: ಹನುಮಂತನ ಸಂವಹನ ಕೌಶಲ್ಯ

 ||ಓಂ ಆಂಜನೇಯಾಯ ನಮಃ||

Voice of RK

ಹೊಳೆವ ಹೊನ್ನ ಮೈಬಣ್ಣ, ಗುಂಗುರು ಕೇಶರಾಶಿ, ಕರ್ಣಕುಂಡಲ  ಧಾರಿಯಾದ ಸೀತಾ ಮಾತೆಯ ಶೋಕ ನಿವಾರಕನಾದ     ಹನುಮಂತನ ಸಂವಹನ ಕೌಶಲ್ಯವನ್ನು ತಿಳಿಯುವ ಚಿಕ್ಕ ಪ್ರಯತ್ನವೇ ಇಂದಿನ ಗುರುವಾಣಿ.

ರಾಮ ಹನುಮರ ಪ್ರಥಮ ಭೇಟಿಯ ಬಗ್ಗೆ ನಾವು ಹಿಂದಿನ ವಾರ ತಿಳಿದುಕೊಂಡಿದ್ದೇವೆ. ಹನುಮಂತ ತನ್ನ ವಾಕ್ಚಾತುರ್ಯದಿಂದ ರಾಮ ಲಕ್ಷ್ಮಣರ ಮನಸ್ಸು ಮತ್ತು ಹೃದಯವನ್ನು ಗೆದ್ದು ಅಯೋಧ್ಯೆಯ ರಾಜಕುಮಾರರು ಬಂದ ಕಾರಣವನ್ನು ತಿಳಿಯುತ್ತಾನೆ. ಅಯೋಧ್ಯ/ಧ್ಯಾ ಪುರುಷ ಶ್ರೀ ರಾಮ ಹನುಮಂತನ ಸಂವಹನ ಸಾಮರ್ಥ್ಯವನ್ನು ಮೆಚ್ಚಿ ಕಪಿಶ್ರೇಷ್ಠನನ್ನು ಅಭಿನಂದಿಸುತ್ತಾನೆ.

ಹಾಗೂ ಪರಿಣಾಮಕಾರಿ ಸಂವಹನದ ಸಪ್ತಸೂತ್ರಗಳನ್ನು ಶ್ರೀರಾಮಚಂದ್ರ ವಿವರಿಸುತ್ತಾನೆ.ಈ ಸೂತ್ರಗಳನ್ನು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಆ ಸಪ್ತ ಸೂತ್ರಗಳು ಯಾವುವೆಂದರೆ :

ಸೂತ್ರ 1: ಅಗತ್ಯಕ್ಕೆ ತಕ್ಕಂತೆ ಸಂಕ್ಷಿಪ್ತವಾಗಿ ಮಾತನಾಡುವುದು.

ಸೂತ್ರ2.ಮಾತಿನಲ್ಲಿ ಸ್ಪಷ್ಟತೆ ಇರುವುದು.

ಸೂತ್ರ3:ಮಾತನಾಡುವಾಗ/ಮಾತಿನಲ್ಲಿ ಯಾವುದೇ ವ್ಯಾಕರಣ ದೋಷವಿಲ್ಲದಂತೆ ಮಾತನಾಡುವುದು.

ಸೂತ್ರ 4: ಸಂದರ್ಭಕ್ಕೆ ಸೂಕ್ತವಾದ ಪದಗಳನ್ನು ಬಳಸಿ ಮಾತನಾಡುವುದು.

ಸೂತ್ರ 5 :ಸ್ಪಷ್ಟವಾಗಿ ಕೇಳುವಂತೆ ಮದ್ಯಮ ಧ್ವನಿಯಲ್ಲಿ ಮಾತನಾಡುವುದು.

ಸೂತ್ರ 6: ಮದ್ಯಮ ಧ್ವನಿಯೊಂದಿಗೆ ಪದಗಳ ಉಚ್ಛಾರಣೆ ಸಂಗೀತದಂತೆ ಲಯಬದ್ಧವಾಗಿರುವುದು, ಹಾಗೂ

ಸೂತ್ರ 7: ಆಡುವ ಮಾತು ನೇರವಾಗಿ ಹೃದಯಕ್ಕೆ ಮುಟ್ಟುವಂತೆ ಮಾತನಾಡುವುದು.

ಇವೆ/ಇವೇ ಪರಿಣಾಮಕಾರಿ ಸಂವಹನದ ಸಪ್ತ ಸೂತ್ರಗಳು.

ಮುಖ್ಯಪ್ರಾಣ ಆಂಜನೇಯ ಕೇವಲ ದೈಹಿಕವಾಗಿ ಬಲಶಾಲಿಯಾಗಿರದೆ ಭಾಷೆ, ವೇದಾ/ದ ಹಾಗೂ ವಿಜ್ಞಾನದಲ್ಲಿ ಪಾಂಡಿತ್ಯ ಹೊಂದಿದ್ದ. ಆದ್ದರಿಂದಲೇ ಈತನನ್ನು ಜ್ಞಾನ ಗುಣಗಳ ಸಾಗರ ನೆಂದು ಸಂಬೋಧಿಸಲಾಗುತ್ತದೆ.

ಆಂಜನೇಯ ಭಕ್ತರೇ ‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆಯಂತೆ ಸಂವಹನದ ಪರಿಣಾಮಕಾರಿ ಸಪ್ತ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು  ಈ ಜೀವನಪಥದಲ್ಲಿ ನಾವೆಲ್ಲರೂ ಮುಂದೆ ಮುಂದೆ ಸಾಗೋಣ.

||ಓಂ ಆಂಜನೇಯಾಯ ನಮಃ||