ಗುರುವಾಣಿ 8: ಆಂಜನೇಯನಿಗೇಕೆ ದೇವರ ಪಟ್ಟ?

ಗುರುವಾಣಿ 8:  ಆಂಜನೇಯನಿಗೇಕೆ ದೇವರ ಪಟ್ಟ? 

 ಮನೋಜವಂ ಮಾರುತತುಲ್ಯವೇಗಂ 

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ |

ವಾತಾತ್ಮಜಂ ವಾನರಯೂಥಮುಖ್ಯಂ

ಶ್ರೀರಾಮ ದೂತಂ ಶರಣಂ ಪ್ರಪದ್ಯೇ ||

Voice of RK

ಶ್ರೀರಾಮಚಂದ್ರನಿಗೆ ಅತ್ಯಂತ ಪ್ರಿಯನೂ  ವಾಯುದೇವರ ಪ್ರೇಮಪುತ್ರನೂ/ಪ್ರೇಮಸುತನೂ ಸೀತಾಮಾತೆಯ ಹುಡುಕುವ ಸಾಹಸಕ್ಕೆ ಪಣತೊಟ್ಟವನೂ, ಸೀತೆಗಾಗಿ ಕಡಲನ್ನೇ ಹಾರಿ, ರಾಮನಿಗಾಗಿ ಸೇತುವೆ ಕಟ್ಟಿ,  ಲಕ್ಷ್ಮಣನಿಗಾಗಿ ಬೆಟ್ಟವನ್ನೇ ಹೊತ್ತು, ದಾಸರಲ್ಲಿ ದಾಸ ನೆನೆಸಿದ ವೀರಾಧಿವೀರ ಆಂಜನೇಯನಿಗೆ ಸಾಷ್ಟಾಂಗ ನಮಸ್ಕಾರಗಳು.

 ಸಕಲ ಕಷ್ಟಗಳನ್ನು ಪರಿಹರಿಸುವ, ಇಷ್ಟಾರ್ಥಗಳನ್ನು ನೆರವೇರಿಸುವ ಅಷ್ಟಸಿದ್ಧಿಗಳನ್ನು ನೀಡುವ ಈ ಮಹಾಬಲ ಪರಾಕ್ರಮಿ ಶ್ರೀರಾಮನ ಹರ್ಷದ ಆಲಿಂಗನಕ್ಕೆ ಸಹಿ ಎನಿಸಿದ, ಇಷ್ಟಲ್ಲದೆ ನೀನು ನನ್ನ ತಮ್ಮ ಭರತನಿಗೆ ಸಮನೆಂದು ಶ್ರೀರಾಮಚಂದ್ರನಿಂದಲೇ ಪ್ರಶಂಸೆಗೊಳಗಾದ. ರಾಮಾಯಣದ ಅನೇಕ ಪಾತ್ರಗಳು ವಿಶೇಷವೆನಿಸಿದರೂ ರಾಮಲಕ್ಷ್ಮಣರ ನಂತರ ಈ ವಾನರಶ್ರೇಷ್ಠನಿಗೇ ದೇವರ ಪಟ್ಟವೇಕೆ? ವಿಶೇಷ ಪೂಜೆ ಹಾಗೂ ಪಾರಾಯಣವೇಕೆ?

 ಈ ಕಪಿ ಶ್ರೇಷ್ಠ  ತಾನು ಭಕ್ತನೆಂದು ಎಂದೂ ಸೊಕ್ಕಿ ಮೆರೆಯಲಿಲ್ಲ,ಶಕ್ತನೆಂದು ಡಂಭ ಮಾಡಲಿಲ್ಲ. ನೀರಿಗಾಗಿ ಬಾವಿಯಲ್ಲಿ ಇಳಿ ಬಿಟ್ಟ ತಾಮ್ರದ ಕೊಡ ಹೇಗೆ ತಲೆಬಾಗಿಸಿ ಇನ್ನಷ್ಟು ಬೇಕು ಹೃದಯಕ್ಕೆ ರಾಮ ಎಂಬಂತೆ ನೀರನ್ನು ತುಂಬಿಕೊಳ್ಳುತ್ತದೆಯೋ,  ಹಾಗೆಯೇ ಈ ಆಂಜನೇಯ ರಾಮನಾಮವೆಂಬ ರಸಾಮೃತವನ್ನು ಹೀರುತ್ತಾ ಶ್ರೀರಾಮಚಂದ್ರನ ಬಂಟನಾಗಿ ತಲೆ ಬಾಗುತ್ತಿದ್ದ. ಆದ್ದರಿಂದಲೇ ಈ ವಾನರ ವೀರನಿಗೆ ಅಯೋಧ್ಯಾ ಪುರುಷನಾದ ಶ್ರೀರಾಮಚಂದ್ರನಿಂದ ವಿಶೇಷ ಉಡುಗೊರೆಯಾಗಿ ‘ದೇವರ ಪಟ್ಟ’ ಹಾಗೂ ‘ಪ್ರತ್ಯೇಕ ಗುಡಿಯಲ್ಲಿ ಪೂಜೆ’ ಯ ಭಾಗ್ಯ ದೊರಕಿತು.

 ಆಂಜನೇಯ ಭಕ್ತರೇ ಹೇಗೆ ನೀರಲ್ಲಿ ಬಿಟ್ಟ ತಾಮ್ರದ ಕೊಡ ತಲೆಬಾಗಿಸಿ ತನ್ನ ತುಂಬ ನೀರನ್ನು ತುಂಬಿಸಿಕೊಳ್ಳುತ್ತದಯೋ  ಹಾಗೆಯೇ ಈ ಆಂಜನೇಯನಿಗೆ ತಲೆಬಾಗಿಸಿ  ಈ ಮನಸ್ಸೆಂಬ/ಮನವೆಂಬ ಕೊಡದಲ್ಲಿ ಅಷ್ಟಗುಣಗಳನ್ನು ತುಂಬಿಕೊಂಡು ಕೇಸರಿ ಪುತ್ರನ ಕೃಪೆಗೆ ಪಾತ್ರರಾಗೋಣ.

||ಓಂ ಆಂಜನೇಯಾಯ ನಮಃ||