ಗುರುವಾಣಿ 2 : ಆಂಜನೇಯನ ಭವ್ಯ ವ್ಯಕ್ತಿತ್ವದ ವರ್ಣನೆ

 || ಓಂ ಆಂಜನೇಯಾಯ ನಮಃ||
 ಗುರುವಾಣಿ 2 : ಆಂಜನೇಯನ ಭವ್ಯ ವ್ಯಕ್ತಿತ್ವದ ವರ್ಣನೆ

ಅಯೋಧ್ಯೆಯ ಮರ್ಯಾದಾ ಪುರುಷನಾದ ಶ್ರೀ ರಾಮನ ಪರಮ ಭಕ್ತ, ಜ್ಞಾನ ಗುಣಗಳ ಸಾಕಾರನಾದ ಕಪಿಶ್ರೇಷ್ಠ ಶ್ರೀ ಆಂಜನೇಯನ  ವರ್ಣನೆಯೇ ಇಂದಿನ ಗುರುವಾಣಿ.

.ಶ್ರೀ ತುಳಸಿದಾಸರು ಹನುಮಾನ್ ಚಾಲಿಸದಲ್ಲಿ ಆಂಜನೇಯನ ಭವ್ಯ ವ್ಯಕ್ತಿತ್ವದ ವರ್ಣನೆ ಮಾಡಿರುತ್ತಾರೆ. ಇದರ ಆಯ್ದ ಭಾಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ನಾವಿಂದು ಮಾಡುತ್ತಿದ್ದೇವೆ.

ಹನುಮಂತ ಹೇಗಿದ್ದ ಎನ್ನುವುದು ನಿಮಗೆ ತಿಳಿದಿದೆಯೇ? ಹೊಳೆವ ಹೊನ್ನ ಮೈಬಣ್ಣ, ಸುರಳಿ ಸುರಳಿಯಾದ ಕೇಶ ರಾಶಿ,.ಕಿವಿಯಲ್ಲಿ ಕರ್ಣಕುಂಡಲ, ಸುಂದರ ವಸ್ತ್ರದ ಉಡುಗೆ ಧರಿಸಿದ ಈ ಬಲಶಾಲಿಯ ಒಂದು ಕೈಯಲ್ಲಿ ವಜ್ರಾಯುಧ ಮತ್ತೊಂದು ಕೈಯಲ್ಲಿ ವಿಜಯದ ಧ್ವಜ, ದಬ್ಬೆಯ ಒಂದು ಉಪವೀತನವನ್ನು ಭುಜದ ಮೇಲೆ ಧರಿಸಿರುವ ಈತನಿಗೆ ಇಡೀ ಭೂ ಮಂಡಲವೇ ತಲೆಬಾಗಿ ನಮಿಸುತ್ತದೆ.   

ಇದು ಕಪಿಶ್ರೇಷ್ಠನ ಕಠಿಣತೆ, ದೃಡನಿರ್ಧಾರ ಮತ್ತು ಶ್ರೇಷ್ಠತೆಯನ್ನು ತೋರಿಸುತ್ತದೆ. ವಿದ್ಯಾವಂತ, ಗುಣವಂತ ಅತಿ ಚತುರ. ಶ್ರೀ ರಾಮನ ಸೇವಾ ಕೈಂಕರ್ಯಕ್ಕೆ  ಕಾತುರನಾಗಿರುವ ಈತ ಸೂಕ್ಷ್ಮ ರೂಪ ಹೊಂದಿ ಸೀತಾಮಾತೆಯನ್ನು ಕಂಡ, ಹಾಗೂ ವಿಕಟ  ರೂಪವನ್ನು ಹೊಂದಿ ಲಂಕೆಯನ್ನೇ ಸುಟ್ಟ. ಇದು ಪವನಸುತನ ಸಂದರ್ಭಕ್ಕೆ ಹೊಂದಿಕೊಳ್ಳುವ ಹಾಗೂ  ತಕ್ಕನಾಗಿ ವರ್ತಿಸುವ ಅತಿಚತುರತೆಯ ವ್ಯಕ್ತಿತ್ವವನ್ನ ಬಿಂಬಿಸುತ್ತದೆ. ಸಂಜೀವಿನಿಯನ್ನು ತಂದು  ಲಕ್ಷಮಣನನ್ನು ಬದುಕಿಸಿ, ಸುಗ್ರೀವನಿಗೆ ರಾಮನನ್ನು ಪರಿಚಯಿಸಿ, ಪುನಹ  ರಾಜ ಪದವಿಯನ್ನು ಕೊಡಸಿದ. ಈ ಅಂಜನಸುತನನ್ನು ಸಾವಿರ ವಚನಗಳು ಈ ಯಶಸ್ಸಿನ ವೈಭವವನ್ನು ಹಾಡುತ್ತದೆ.ಆಂಜನೇಯನ ವೈಭವ ಸಪ್ತ ಸಾಗರಗಳಿಗೂ ಮಿಗಿಲಾದುದ್ದು. ಸಾಧು ಸಂತರು, ಮುನಿಗಳು, ನಾರದರು, ಶಾರದೆ, ಆಧಿಶೇಷ  ಕುಬೇರ ಇವರುಗಳಿಗೆ  ಸಹ ಪವನಸುತನ ವರ್ಣನೆ ಅಸಾಧ್ಯವಾದ ಮಾತು. ಆಂಜನೇಯನ ಬಲಕ್ಕೆ ಮೂರು ಲೋಕಗಳು ಹೆದರುತ್ತವೆ, ಹೆಸರು ಕೇಳಿದರೆ ಭೂತ ಪಿಸಾಚಿಗಳು  ಹತ್ತಿರ ಸುಳಿಯುವುದಿಲ್ಲ. ಯಾರು ಅತಿ ಬಲವಂತನನ್ನು ಕಾಯಾ, ವಾಚ ಹಾಗೂ ಮನಸ್ಸಿನಿಂದ ಧ್ಯಾನಿಸುತ್ತಾರೋ ಅವರ ಸಂಕಷ್ಟಗಳು ದೂರವಾಗುತ್ತದೆ.  ಕೇಸರಿಪುತ್ರನೆ  ನೀನು ಸಾಧು ಸಂತರ ರಕ್ಷಕ, ಅಸುರರ ಸಂಹಾರಕ, ರಾಮಪ್ರಿಯ.ನಿನ್ನ ವೈಭವ ನಾಲ್ಕು ಯುಗಗಳಲ್ಲಿಯು ಪ್ರಚಲಿತ. ದೇವಾದಿದೇವ, ಸಂಕಷ್ಟ ನಿವಾರಕ, ಇಂದ್ರೀಯಗಳ ಒಡೆಯ ನಮಗೆಲ್ಲರಿಗೂ ವಿಧ್ಯ, ಬುದ್ದಿ, ಬಲ ಮತ್ತು ಆರೋಗ್ಯವನ್ನು ದಯಪಾಲಿಸು. ಶ್ರೀ ಶಂಕರ ಅವತಾರಿ ಪವನಸುತನೆ, ನಿನ್ನ ನಾಮಸ್ಮರಣೆಯೊಂದೆ ನಮ್ಮ ಕಾಯಕವಾಗಿರಲಿ. 

|| ಓಂ ಆಂಜನೇಯಾಯ ನಮಃ||

Voice of RK